#ಸನ್ನುಡಿ
#ಸನ್ನುಡಿ
ಸವಿನುಡಿಗಳೆಂಬ ಕಾಳುಗಳನ್ನು ಕಣವಾಗಿಸಿದೆ
ಬಿರುನುಡಿಯ ಜೊಳ್ಳುಗಳ ತೂರಿ
ನುಡಿ ಸನ್ನುಡಿಯಾಗಲು ಒನಕೆ ಬೀಸುಗಲ್ಲಿಗೆ ತುತ್ತಾಯಿತು
ಸನ್ನುಡಿಗಳು ಜನರ ಹಸಿವ ಹಿಂಗಿಸುವ ಅನ್ನವಾಯಿತು
ದಿಟದ ಸವಿನುಡಿಳೆಂಬ ಕಾಳುಗಳು ನೆಲಕ್ಕೆ ಬಿದ್ದವು
ಮಣ್ಣಿನ ಸಂಪರ್ಕಕ್ಕೆಬಂದ ಕಾಳುಗಳು ಮೊಳೆತು ಸನ್ನುಡಿಯನ್ನೇ ಬೆಳೆದವು
ಬಿರು ನುಡಿಗಳೆಂಬ ಜೊಳ್ಳು ದಿಟದ ಕಾಳುಗಳಂತೆ ಕಂಡರೂ
ಕೆಡುನುಡಿಗಳಾಗಿ ಮಣ್ಣಾಗುವ ಮಾರ್ಗವನ್ನೇ ಅನುಸರಿಸಿದವು
ಮೊಳೆಯಲೂ ಇಲ್ಲ ಬೆಳೆಯಲೂ ಇಲ್ಲ, ಆದರೆ ಇಂದಿಗೂ
ಮಾಯೆಯಂತೆ ಹುಟ್ಟಿ ಬರುತ್ತಲೇ ಇವೆ.. ತಡೆಯುವವರಾರೂ ಇಲ್ಲ.
📝NPK...
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ಪ್ರತ್ಯುತ್ತರಅಳಿಸಿ