ಒಡೆದಾಳುವರಿಂದ ಬೇರಾದವರು

ಪಕ್ಕದಲ್ಲಿದ್ದೂ ಪರಕೀಯರಾದವರೆಷ್ಟೋ
ಪರರು ಪರಿಚಿತರಾಗಿರುವಾಗ
ಮನದಿ ಉಗಿಯದೇ ಮಿಕ್ಕ ಪದಗಳೆಷ್ಟೋ
ಉರಿದು ಮೆರೆಯುವ ಉಡಾಡಿಗಳ ಕಂಡಾಗ

ಒಡೆದಾಳುವವರ ಒಡೆಯನೆಂದಿಬಾಲಿಪರು
ಒಡನಾಡಿಗಳ ಒಡಲಿಗೆ ಕಿಚ್ಚನಿಡುವ ದ್ರೋಹಿಗಳು
ಪಡೆಯಲೇನಹೊರಟಿರಿನೀವು....?
ಪಡೆಕಟ್ಟಿ ಪಟ್ಟಣದಿ ಪಟ್ಟಭದ್ರವ ಗೊಳಿಸಿ.

ಪಡೆದವರೋ.. ಪಟ್ಟದಲಿ ಎಷ್ಟುದಿನ ಪಾಲಿಪರು
ಪಾಪದ ಪ್ರಾಯಶ್ಚಿತ್ತದ ಮೊತ್ತ ಪಾವತಿಸುವ ತನಕ
ಪಾಮರರ ಪ್ರಾಣವ ಹಿಂಡಿ ಪಗಡೆಯನಾಡುವರೇ ಎಲ್ಲ
ಪ್ರಜೆಗಳ ಬವಣಿಕೆಗೆ ಕಿಂಚಿತ್ತೂ ಬೆಲೆಯಿಲ್ಲ.

ಇನ್ನೂ ಕಾಲ ಮಿಂಚಿಲ್ಲ ಸಹೋದರರೇ
ನಾಡ ದೇವಿಯ ಮಕ್ಕಳು ನಾವೆಲ್ಲ ಒಂದೇ
ಜಾತಿಯಿಂದಲ್ಲ ಆಳುವವರ ನೀತಿಯಿಂದ ಬೇರಾದೆವು
ಬೇಗ ಮತ ಭೇದವ ಮರೆತು ಮನುಜರಾಗೋಣ
ಮಾತೆಯ ಮಮತೆಯ ಮಡಿಲಲಿ ಆಡಿ ನಲಿಯೋಣ
ಭವ್ಯಭಾರತದ ಭರವಸೆಯ ಬಯಕೆಗಳ ಬಂಧ ಬೆಸೆಯೋಣ.

✒NPK..

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು